ಅಂಪೈರ್‌ಗೆ ಜೀವ ಬೆದರಿಕೆ ಹಾಕಿದ್ರಾ ವಿಶ್ವಪ್ರಸಿದ್ಧ ಆ ಸ್ಟಾರ್ ವೇಗಿ?

India:

Font size:

ಮೊದಲ ಎಸೆತದಲ್ಲೇ 3 ಬಾರಿ ವಿಕೆಟ್ ಕಿತ್ತ ವಿಶ್ವ ದಾಖಲೆ ವೀರನಿಗೆ ಬಿತ್ತು ಬರೆ!

ಕಠ್ಮಂಡು: ಒಂದೆಡೆ ವಿಶ್ವದಾದ್ಯಂತ ಐಪಿಎಲ್ 2026ರ ಕ್ರಿಕೆಟ್ ಅಬ್ಬರ ಜೋರಾಗಿದ್ದರೆ, ಇನ್ನೊಂದೆಡೆ ನೇಪಾಳ ಕ್ರಿಕೆಟ್‌ನಲ್ಲಿ ಸ್ಟಾರ್ ಆಟಗಾರನೊಬ್ಬನ ವಿವಾದಾತ್ಮಕ ನಡೆ ಈಗ ಕ್ರೀಡಾ ಲೋಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿದೊಡ್ಡ ಇತಿಹಾಸ ಸೃಷ್ಟಿಸಿದ್ದ ನೇಪಾಳದ ವೇಗಿ ಕರಣ್ ಕೆಸಿ, ಅಂಪೈರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಹಾಕಿದ ವಿವಾದಾತ್ಮಕ ಪೋಸ್ಟ್‌ನಿಂದಾಗಿ ಈಗ ಅಮಾನತು ಹಾಗೂ ದಂಡದ ರೂಪದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ.

​ಏಪ್ರಿಲ್ 11ರ ಶನಿವಾರದಂದು ನಡೆದ 'ಪ್ರಧಾನ ಮಂತ್ರಿ ಕಪ್ ಏಕದಿನ ರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್' ಪಂದ್ಯದ ವೇಳೆ ಈ ಅಹಿತಕರ ಘಟನೆ ನಡೆದಿದೆ. ಪಂದ್ಯದ ಸಂದರ್ಭದಲ್ಲಿ ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನಗೊಂಡಿದ್ದ ಕರಣ್ ಕೆಸಿ, ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, "ಪಂದ್ಯದ ಸಮಯದಲ್ಲಿ ಆಟಗಾರನೊಬ್ಬ ಆಕಸ್ಮಿಕವಾಗಿ ಅಂಪೈರ್‌ಗೆ ಹೊಡೆದರೆ ಏನಾಗುತ್ತದೆ?" ಎಂಬ ವಿಚಿತ್ರ ಪ್ರಶ್ನೆಯನ್ನು ಬರೆದುಕೊಂಡಿದ್ದರು. ಇದನ್ನು ಅಂಪೈರ್‌ಗಳಿಗೆ ನೀಡಿದ ಪರೋಕ್ಷ ಬೆದರಿಕೆ ಎಂದೇ ಪರಿಗಣಿಸಲಾಗಿದ್ದು, ಈ ಪೋಸ್ಟ್ ಪಂದ್ಯದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕರಣ್ ಅವರ ಈ ಬೇಜವಾಬ್ದಾರಿಯುತ ನಡೆಯಿಂದ ರೊಚ್ಚಿಗೆದ್ದ ಅಂಪೈರ್‌ಗಳು ತಕ್ಷಣವೇ ತುರ್ತು ಸಭೆ ಕರೆದು, ಆಟಗಾರನ ಈ ವರ್ತನೆಯು ಪಂದ್ಯದ ಅಧಿಕಾರಿಗಳ ಘನತೆ ಮತ್ತು ಸುರಕ್ಷತೆಗೆ ಧಕ್ಕೆ ತರುತ್ತದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

​ವಿಷಯ ಗಂಭೀರ ಸ್ವರೂಪಕ್ಕೆ ತಿರುಗುತ್ತಿರುವುದನ್ನು ಅರಿತ ಕರಣ್ ಕೆಸಿ, ಕೂಡಲೇ ತಮ್ಮ ಪೋಸ್ಟ್ ಅನ್ನು ಡಿಲಿಟ್ ಮಾಡಿ ಬಹಿರಂಗವಾಗಿ ಕ್ಷಮೆಯಾಚಿಸಿದರು. ಆದರೆ, ಪಟ್ಟು ಬಿಡದ ಅಂಪೈರ್‌ಗಳು ನೇಪಾಳ ಕ್ರಿಕೆಟ್ ಸಂಘಕ್ಕೆ (CAN) ಅಧಿಕೃತ ದೂರು ನೀಡಿದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಮಂಡಳಿಯು ಶಿಸ್ತು ಕ್ರಮವಾಗಿ ಕರಣ್ ಕೆಸಿ ಅವರಿಗೆ ಒಂದು ಪಂದ್ಯದ ನಿಷೇಧ ಹೇರಿದ್ದಲ್ಲದೆ, ನೂರಕ್ಕೆ ನೂರರಷ್ಟು ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಿದೆ.

​ನೇಪಾಳ ಕ್ರಿಕೆಟ್ ತಂಡದ ಅತ್ಯಂತ ಅನುಭವಿ ಬೌಲರ್ ಆಗಿರುವ ಕರಣ್ ಕೆಸಿ, ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆಗೆ ಹೆಸರಾದವರು. ಪಂದ್ಯವೊಂದರ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವುದು ಕಷ್ಟದ ಕೆಲಸ, ಆದರೆ ಕರಣ್ ಈ ಸಾಧನೆಯನ್ನು ಬರೋಬ್ಬರಿ 3 ಬಾರಿ ಮಾಡುವ ಮೂಲಕ ವಿಶ್ವದ ಮೊದಲ ಬೌಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಹಿಂದೆ ಹಾಂಗ್ ಕಾಂಗ್ ವಿರುದ್ಧ ಎರಡು ಬಾರಿ ಹಾಗೂ ಮಲೇಷ್ಯಾ ವಿರುದ್ಧ ಒಂದು ಬಾರಿ ಈ ಮೈಲಿಗಲ್ಲು ನಿರ್ಮಿಸಿದ್ದರು. ಇಂತಹ ಸಾಧಕ ಆಟಗಾರ ಈಗ ಮೈದಾನದ ಶಿಸ್ತು ನಿಯಮ ಉಲ್ಲಂಘಿಸಿ, ಅಂಪೈರ್‌ಗಳ ವಿರುದ್ಧ ವಿವಾದಕ್ಕಿಳಿದು ಮುಖಭಂಗ ಅನುಭವಿಸುವಂತಾಗಿದೆ.

Comments

Leave a Comment

Prev Post ಸಿದ್ದು 'ಅಸಹಾಯಕ', ಡಿಕೆಶಿ 'ದಾರಿ ತಪ್ಪಿದ ಮಗ': ಕಾಂಗ್ರೆಸ್ ಅಂಗಳದಲ್ಲಿ ರಾಜಣ್ಣ ಸಿಡಿಸಿದ ಆಟಂ ಬಾಂಬ್!
Next Post ಹಣವಿಲ್ಲ, ಮೊಬೈಲ್‌ ಇಲ್ಲ, ಎಟಿಎಂ ಬಳಸುತ್ತಿಲ್ಲ:

IPL ಇತಿಹಾಸದಲ್ಲೇ ಅತಿದೊಡ್ಡ ಮಾರಾಟ: 16,000 ಕೋಟಿ ರೂ ಗೆ RCB ಸೇಲ್; ಹೊಸ ಮಾಲೀಕರು ಯಾರು ಗೊತ್ತಾ?

ಭಾರತೀಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್‌ನ ಬೋಲ್ಟ್ ವೆಂಚರ್ಸ್ ಮತ್ತು ಯುಎಸ್ ಮೂಲದ ಬ್ಲಾಕ್‌ಸ್ಟೋನ್ ಒಳಗೊಂಡಿರುವ ಕನ್ಸೋರ್ಟಿಯಂ ಹೊಸ ಮಾಲೀಕರಾಗಿದ್ದಾರೆ

ಜನಪ್ರತಿನಿಧಿಗಳ ಐಪಿಎಲ್ ಟಿಕೆಟ್ ಲಾಬಿ

ವಿಧಾನಸಭೆಯಲ್ಲಿ ವಿಐಪಿ ಟಿಕೆಟ್‌ಗಾಗಿ ಮುಗಿಬಿದ್ದ ಜನಪ್ರತಿನಿಧಿಗಳು; ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ, ವ್ಯವಸ್ಥೆಯ ವಿರುದ್ಧ ಗುಡುಗು!

ತುಮಕೂರಿನ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ಅಂತರಾಷ್ಟ್ರೀಯ ಮಹಿಳಾ ಟೆನಿಸ್ ಚಾಂಪಿಯನ್‌ಶಿಪ್‌ಗೆ ವೇದಿಕೆ ಸಜ್ಜು!

ಕ್ರೀಡಾ ನಗರಿಯಾಗುವತ್ತ ತುಮಕೂರಿನ ದಿಟ್ಟ ಹೆಜ್ಜೆ: ವಿಶ್ವದರ್ಜೆಯ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಲು ಸಿದ್ಧತೆ

IPL 2026: RCB ಗೆ ಸಿಕ್ಕಿದಾನಾ ಹೊಸ 'ಡಫಿ' ಡೈಮಂಡ್? ಚೊಚ್ಚಲ ಪಂದ್ಯದಲ್ಲೇ ತ್ರಿವಿಕ್ರಮ ಸಾಧನೆ!

ಹ್ಯಾಜಲ್‌ವುಡ್ ಚಿಂತೆ ದೂರ ಮಾಡಿದ ನ್ಯೂಜಿಲೆಂಡ್ ವೇಗಿ: ಚಿನ್ನಸ್ವಾಮಿಯಲ್ಲಿ ಜಾಕೋಬ್ ಡಫಿ ಅಬ್ಬರ!

IPL 2026: ಸಾಲ್ಟ್‌ನ ಸೂಪರ್‌ಹೀರೋ ಎಂಟ್ರಿ! ABD ನೆನಪಿಸಿದ ಅಸಾಮಾನ್ಯ ಕ್ಯಾಚ್‌ಗಳು!

ಸನ್‌ರೈಸರ್ಸ್ ವಿರುದ್ಧ RCB ಗೆಲುವಿಗೆ ಸಾಲ್ಟ್‌ನ ಮಾಂತ್ರಿಕ ಸ್ಪರ್ಶ! ಬೌಂಡರಿ ಲೈನ್‌ನಲ್ಲಿ ಚಿರತೆಯಂತೆ ಜಿಗಿದು ಹಿಡಿದ ಅದ್ಭುತ ಕ್ಯಾಚ್‌ಗಳು!

ಬೆಂಗಳೂರಿನಲ್ಲಿ ಆರ್‌ಸಿಬಿ 'ಸುನಾಮಿ': ಹೈದರಾಬಾದ್ ವಿರುದ್ಧ ಚೇಸಿಂಗ್ ದಾಖಲೆ ಬರೆದ ಬೆಂಗಳೂರು!

ಬ್ಯಾಟಿಂಗ್ ಅಬ್ಬರವನ್ನ ಕಣ್ತುಂಬಿಕೊಂಡ ಅಭಿಮಾನಿಗಳು : ಪಡೀಕಲ್-ವಿರಾಟ್ ಅಬ್ಬರಕ್ಕೆ ಧೂಳೀಪಟವಾಯ್ತು ಸನ್‌ರೈಸರ್ಸ್ ಕೋಟೆ!

Read all News