ಸಿದ್ದು 'ಅಸಹಾಯಕ', ಡಿಕೆಶಿ 'ದಾರಿ ತಪ್ಪಿದ ಮಗ': ಕಾಂಗ್ರೆಸ್ ಅಂಗಳದಲ್ಲಿ ರಾಜಣ್ಣ ಸಿಡಿಸಿದ ಆಟಂ ಬಾಂಬ್!

Bengaluru Division:

Font size:

ದೊರೆಗೆ ಇಲ್ಲದ ಶಿಕ್ಷೆ ನಮಗೇಕೆ?' ಶಿಸ್ತಿನ ಹೆಸರಲ್ಲಿ ಸಿದ್ದರಾಮಯ್ಯ ಆಪ್ತರ ಹನನಕ್ಕೆ ಶಾಸಕ ರಾಜಣ್ಣ ಕೆಂಡಾಮಂಡಲ!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಎಂಬ ‘ಕೈ’ ಕೋಟೆಯಲ್ಲಿ ಈಗ ಭಿನ್ನಮತದ ಕಿಚ್ಚು ಹತ್ತಿಕೊಂಡಿದೆ. ಸದಾ ನೇರ ನುಡಿಗೆ ಹೆಸರಾದ ಶಾಸಕ ಕೆ.ಎನ್. ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಮರ ಸಾರಿದ್ದು, ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

ಸಿಎಂ ಅಸಹಾಯಕತೆ - ರಾಜಣ್ಣನ ವ್ಯಥೆ:

"ಹುಲಿಯಂತಿದ್ದ ಸಿದ್ದರಾಮಯ್ಯ ಇಂದು ಅಸಹಾಯಕರಾಗಿರುವುದು ಆಘಾತಕಾರಿ" ಎಂದು ಅಬ್ಬರಿಸಿರುವ ರಾಜಣ್ಣ, ಸಿಎಂ ಬೆನ್ನಿಗೆ ನಿಂತವರನ್ನೇ ಆಯ್ದು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಬ್ದುಲ್ ಜಬ್ಬಾರ್ ಅಮಾನತು ಮತ್ತು ನಸೀರ್ ಅಹ್ಮದ್ ಪದಚ್ಯುತಿ ಹಿಂದೆ ದೊಡ್ಡ ಪಿತೂರಿಯೇ ನಡೆದಿದೆ. ಸಿದ್ದರಾಮಯ್ಯ ಅವರು ಒತ್ತಡಕ್ಕೆ ಮಣಿದು ಮೌನಕ್ಕೆ ಶರಣಾಗಿದ್ದಾರೆ ಎನ್ನುವುದು ರಾಜಣ್ಣ ಅವರ ನೇರ ಆರೋಪ.

ಡಿಕೆಶಿ ಹಾದಿ ತಪ್ಪುತ್ತಿದ್ದಾರೆಯೇ?

ಹೆಸರೆತ್ತದೆ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಹಿಂದೆ ರಾಹುಲ್ ಗಾಂಧಿ ಅಂದ್ರೆ ಯಾರು ಎಂದು ಕೇಳಿದವರ ಮದುವೆಗೆ ಹೋಗಿ ಬರುವುದು ಯಾವ ಸೀಮೆಯ ಶಿಸ್ತು?" ಎಂದು ಪ್ರಶ್ನಿಸಿದರು. ಹೈಕಮಾಂಡ್ ವಿರೋಧದ ನಡುವೆಯೂ ಪ್ರಯಾಗ್‌ರಾಜ್‌ನಲ್ಲಿ ಮುಳುಗು ಹಾಕಿದ ಡಿಕೆಶಿ ನಡವಳಿಕೆಯನ್ನು ರಾಜಣ್ಣ ಕಟುವಾಗಿ ಟೀಕಿಸಿದ್ದಾರೆ.

ಶಿಸ್ತಿನ ಕ್ರಮದಲ್ಲೂ ತಾರತಮ್ಯದ ದರ್ಬಾರ್:

  • ಶಾಮನೂರಿಗೆ ರಿಯಾಯಿತಿ: ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲಿಸಿ ಅಂದ ಶಾಮನೂರು ಶಿವಶಂಕರಪ್ಪ ವಿರುದ್ಧ ಕ್ರಮವಿಲ್ಲವೇಕೆ?
  • ಅಧಿಕಾರ ದುರುಪಯೋಗ: ಸಮರ್ಥ್ ಮಲ್ಲಿಕಾರ್ಜುನ್ ಅಶಿಸ್ತು ತೋರಿದಾಗ ಯಾರೂ ತುಟಿ ಬಿಚ್ಚಲಿಲ್ಲ ಯಾಕೆ?
  • ಟಾರ್ಗೆಟ್ ಜಮೀರ್: ಮುಂದಿನ ಗುರಿ ಸಚಿವ ಜಮೀರ್ ಅಹ್ಮದ್ ಅವರೇ ಎಂಬ ಊಹಾಪೋಹಕ್ಕೆ ರಾಜಣ್ಣ ಪುಷ್ಟಿ ನೀಡಿದ್ದಾರೆ.

​"ದೊರೆ ಮಾಡಿದರೆ ಶಿಕ್ಷೆ ಇಲ್ವಾ?" ಎಂದು ಪ್ರಶ್ನಿಸಿರುವ ರಾಜಣ್ಣ, ಸಿದ್ದರಾಮಯ್ಯ ಪರ ಇರುವವರನ್ನು ತುಳಿಯಲು ಹೋದರೆ ಪರಿಣಾಮ ನೆಟ್ಟಗಿರಲ್ಲ ಎಂಬ ಎಚ್ಚರಿಕೆಯನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ. ಈ ರಾಜಕೀಯ ಜಿದ್ದಾಜಿದ್ದಿ ಈಗ ಸಚಿವ ಸಂಪುಟ ಪುನರ್ರಚನೆಯ ಹೊಸ್ತಿಲಲ್ಲಿ ಹೊಸ ತಿರುವು ಪಡೆದುಕೊಂಡಿದೆ

Comments

Leave a Comment

Prev Post ಬೆಂಗಳೂರಿನಲ್ಲಿ 'ಮದುವೆ ಗಿರಾಕಿ' ಇಂಜಿನಿಯರ್ ರಂಗಾಟ
Next Post ಅಂಪೈರ್‌ಗೆ ಜೀವ ಬೆದರಿಕೆ ಹಾಕಿದ್ರಾ ವಿಶ್ವಪ್ರಸಿದ್ಧ ಆ ಸ್ಟಾರ್ ವೇಗಿ?

ಶಾಸಕಾಂಗ ಸಭೆಯಲ್ಲಿ 'ಕೈ' ಮುಖಂಡರ ರಣತಂತ್ರ: ಉಪಚುನಾವಣೆ ಗೆಲ್ಲುವುದು ಅನಿವಾರ್ಯ; ನಾಯಕರಿಗೆ ಸುರ್ಜೇವಾಲಾ ಟಾರ್ಗೆಟ್!

ನಾವು ಹಿಂದಿನ ಮೂರು ಉಪಚುನಾವಣೆಗಳನ್ನು ಗೆದ್ದಿದ್ದೇವೆ ಮತ್ತು ಈ ಎರಡೂ ಉಪಚುನಾವಣೆಗಳನ್ನು ಗೆಲ್ಲಲೇಬೇಕು ಎಂದು ಸುರ್ಜೇವಾಲಾ ಸೂಚಿಸಿದ್ದಾರೆ

ಕೇಂದ್ರದ 'ತೈಲ ತಂತ್ರ'ಕ್ಕೆ ಡಿಕೆಶಿ ಗರಂ!

"ನಮ್ಮನ್ನ ಕೊಲೆ ಮಾಡ್ತಿದ್ದಾರೆ" ಎಂದು ಗುಡುಗಿದ ಕನಕಪುರ ಬಂಡೆ..!

ಡಾ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ: ನಗುತ್ತಾ ಪರಸ್ಪರ ಖುಷಿಯಾಗಿ ಕಂಡ ಮೋದಿ-ಖರ್ಗೆ

ಫೋಟೊದಲ್ಲಿ ಪ್ರಧಾನಿ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೈಕುಲುಕಿ, ಫೋಟೋ ತೆಗೆದುಕೊಳ್ಳಲು ಹಲವಾರು ನಾಯಕರನ್ನು ಕರೆಯುತ್ತಿರುವುದು ಕಾಣುತ್ತದೆ.

ನ್ಯಾಯದೀಪದ ಮುಂದೆ 'ಸಿದ್ಧಾಂತ'ದ ನೆರಳು? ಹೈಕೋರ್ಟ್‌ನಲ್ಲಿ ಕೇಜ್ರಿವಾಲ್ ಹೂಡಿದ 'ಬಿಗ್ ಫೈಟ್'!

​"RSS ಕಾರ್ಯಕ್ರಮಕ್ಕೆ ಹೋದವರಿಂದ ನ್ಯಾಯ ಸಿಗಲು ಸಾಧ್ಯವೇ?" - ನ್ಯಾಯಮೂರ್ತಿಗಳ ವಿರುದ್ಧವೇ ಅರವಿಂದ್ ಕೇಜ್ರಿವಾಲ್ ನೇರ ವಾರ್!

ಕಾಂಗ್ರೆಸ್‌ಗೆ ಮುಸ್ಲಿಂ ಸಂಘಟನೆಗಳ ‘ಮಹಾ ಎಚ್ಚರಿಕೆ’: "ನಾವು ಕೇವಲ ವೋಟ್ ಬ್ಯಾಂಕ್ ಅಲ್ಲ, ನಮ್ಮ ತಾಳ್ಮೆ ಪರೀಕ್ಷಿಸಬೇಡಿ!"

"ಹುದ್ದೆ ನೀಡುವುದು ನೀವು ಕೊಡುವ ಭಿಕ್ಷೆಯಲ್ಲ, ನಮ್ಮ ಹಕ್ಕು" - ದಾವಣಗೆರೆ ಉಪಚುನಾವಣೆ ಬೆಳವಣಿಗೆಗಳ ಬೆನ್ನಲ್ಲೇ ಕೈ ನಾಯಕರ ವಿರುದ್ಧ ಮುಸ್ಲಿಂ ಒಕ್ಕೂಟಗಳ ಜಂಟಿ ಆಕ್ರೋಶ!

Read all News