ಅನುಮಾನದ ಕಿಚ್ಚಿಗೆ ಬಲಿಯಾಯ್ತು 20 ವರ್ಷದ ದಾಂಪತ್ಯ: ಸುಂದರವಾಗಿದ್ದಾಳೆಂಬ ಅಸೂಯೆಯೇ ಹೆಂಡತಿಯ ಪಾಲಿಗೆ ಮೃತ್ಯುಪಾಶ!

Kolar:

Font size:

ಅಕ್ಕನ ಮನೆಗೆಂದು ಕರೆದೊಯ್ದು ದಾರಿ ಮಧ್ಯೆಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪಾಪಿ ಪತಿ; ಅನಾಥರಾದ ಕಾಲೇಜು ಮೆಟ್ಟಿಲೇರಿದ ಮಕ್ಕಳು.

ಕೋಲಾರ/ಕೆಜಿಎಫ್ : ಅವಳು ನೋಡಲು ಸುಂದರವಾಗಿದ್ದಾಳೆ ಎನ್ನುವ ಅತಿಯಾದ ಹೆಮ್ಮೆ ಇರಬೇಕಿದ್ದ ಪತಿಗೆ, ಅದೇ ಅವಳ ಸಾವಿಗೆ ಕಾರಣವಾಯಿತು. ಇಪ್ಪತ್ತು ವರ್ಷಗಳ ಕಾಲ ಜೊತೆಗಿದ್ದು, ಸಂಸಾರವೆಂಬ ಹಡಗನ್ನು ಮುನ್ನಡೆಸಿದ ಪತಿ, ಕೇವಲ ಒಂದು ಫೋನ್ ಕರೆಯ ಸಂಶಯದ ಮೇಲೆ ತನ್ನ ಪತ್ನಿಯನ್ನೇ ರಾಕ್ಷಸನಂತೆ ಕೊಚ್ಚಿ ಕೊಂದಿರುವ ಅಮಾನವೀಯ ಘಟನೆ ಕೆಜಿಎಫ್ ನಗರದ ಹೊರವಲಯದಲ್ಲಿ ನಡೆದಿದೆ.

ಘಟನೆಯ ವಿವರ:

ಆಂಧ್ರಪ್ರದೇಶದ ಕುಪ್ಪಂ ತಾಲೂಕಿನ ಪೆದ್ದೂರು ಗ್ರಾಮದ ನಿವಾಸಿ ಗೋಪಿನಾಥ್ ಎಂಬಾತನೇ ತನ್ನ ಪತ್ನಿ ಈಶ್ವರಮ್ಮ (40) ಎಂಬುವವರನ್ನು ಕೊಲೆ ಮಾಡಿದ ಆರೋಪಿ. ವೃತ್ತಿಯಲ್ಲಿ ಟೈಲರ್ ಆಗಿದ್ದ ಗೋಪಿನಾಥ್ ಮತ್ತು ಈಶ್ವರಮ್ಮ ದಂಪತಿಗೆ ಕಾಲೇಜು ಓದುತ್ತಿರುವ ಇಬ್ಬರು ಮಕ್ಕಳಿದ್ದಾರೆ. ಆದರೆ, ಗೋಪಿನಾಥ್‌ನ ಕುಡಿತದ ಚಟ ಮತ್ತು ಪತ್ನಿಯ ಶೀಲದ ಬಗ್ಗೆ ಹೊಂದಿದ್ದ ವಿಪರೀತ ಅನುಮಾನ ಇಡೀ ಸಂಸಾರವನ್ನು ಬೀದಿಗೆ ತಂದಿದೆ.

ಸಂಚು ರೂಪಿಸಿ ನಡೆದ ಹತ್ಯೆ:

ಕಳೆದ ಕೆಲವು ದಿನಗಳಿಂದ ಈಶ್ವರಮ್ಮ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿರಿಕ್ ಮಾಡುತ್ತಿದ್ದ ಗೋಪಿನಾಥ್, ಬುಧವಾರ ಸಂಜೆ 7 ಗಂಟೆಯ ವೇಳೆಗೆ ಸಂಚು ರೂಪಿಸಿದ್ದಾನೆ. "ಬಂಗಾರಪೇಟೆ ತಾಲೂಕಿನ ಹುಣಸನಹಳ್ಳಿಯಲ್ಲಿರುವ ಅಕ್ಕನ ಮನೆಗೆ ಹೊಲಿಗೆ ಬಟ್ಟೆ ಕೊಡಲು ಹೋಗೋಣ ಬಾ" ಎಂದು ನಂಬಿಸಿ ಪತ್ನಿಯನ್ನು ಬೈಕ್ ಮೇಲೆ ಕೂರಿಸಿಕೊಂಡಿದ್ದಾನೆ. ಬೈಕ್ ದೊಡ್ಡವಲಗಮಾದಿ ಗ್ರಾಮದ ಸಮೀಪದ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ, ಬೈಕ್ ನಿಲ್ಲಿಸಿ ಮತ್ತೆ ಗಲಾಟೆ ಆರಂಭಿಸಿದ್ದಾನೆ.

​ಮಾತು ಬೆಳೆದು ಈಶ್ವರಮ್ಮ ಪತಿಯ ವರ್ತನೆಗೆ ಬೇಸತ್ತು ಬೈದಾಗ, ರೊಚ್ಚಿಗೆದ್ದ ಗೋಪಿನಾಥ್ ಬಟ್ಟೆ ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಮಚ್ಚಿನಿಂದ ಪತ್ನಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ. ಆರು ಬಾರಿ ಮಚ್ಚಿನಿಂದ ಕೊಚ್ಚಿದ ಪರಿಣಾಮ, ಈಶ್ವರಮ್ಮ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

"ತಾಯಿಯಿಲ್ಲದವಳು, ತಂದೆ ಜೈಲು ಪಾಲು: ಅತಂತ್ರವಾಯ್ತು ಮಕ್ಕಳ ಬದುಕು"

ಕಾಲೇಜು ಮೆಟ್ಟಿಲೇರಿ ಭವಿಷ್ಯದ ಕನಸು ಕಾಣುತ್ತಿದ್ದ ಇಬ್ಬರು ಮಕ್ಕಳ ಬದುಕು ಇಂದು ಕಗ್ಗತ್ತಲಲ್ಲಿ ಮುಳುಗಿದೆ. ಕಣ್ಣೆದುರೇ ಸುಂದರವಾಗಿದ್ದ ಸಂಸಾರವನ್ನು ಅಪ್ಪನ ಸಂಶಯದ ಬುದ್ಧಿ ಸ್ಮಶಾನವಾಗಿಸಿದ್ದು ಕಂಡು ಮಕ್ಕಳು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.


ಪೊಲೀಸರಿಗೆ ಶರಣಾದ ಆರೋಪಿ:

ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದ ಗೋಪಿನಾಥ್, ತಡರಾತ್ರಿ ಆಂಧ್ರದ ಕುಪ್ಪಂ ತಾಲೂಕಿನ ರಾಳ್ಳಬೋದಗೂರು ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಕೂಡಲೇ ಆಂಧ್ರ ಪೊಲೀಸರು ಕೆಜಿಎಫ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ಆರೋಪಿಯನ್ನು ಉರಿಗಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

​ಸ್ಥಳಕ್ಕೆ ಕೆಜಿಎಫ್ ಎಸ್.ಪಿ ಶಿವಾಂಶು ರಜಪೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉರಿಗಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ನಡೆಯುವ ಇಂತಹ ದುರಂತಗಳು ಸಮಾಜ ತಲೆತಗ್ಗಿಸುವಂತೆ ಮಾಡಿವೆ.

Comments

Leave a Comment

Prev Post ಬೆಂಗಳೂರಿನಲ್ಲಿ ₹410 ಕೋಟಿ GST ಮೆಗಾ ಹಗರಣ ಬಯಲು: ಆಧಾರ್, ಪಾನ್ ಕಾರ್ಡ್‌ಗಳೇ ಅಸ್ತ್ರ!
Next Post ನೈಟಿ ಹಾಕಿದ್ದೇ ತಪ್ಪಾ? ಹೆಂಡತಿಯನ್ನೇ ಜೀವಂತ ದಹಿಸಲು ಯತ್ನಿಸಿದ 'ಕಿರಾತಕ' ಪತಿ: ಬೆಳಗಾವಿಯಲ್ಲಿ ಬೆಚ್ಚಿಬೀಳಿಸುವ ಕ್ರೌರ್ಯ!

ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಿನಿಮಾಗಳ ಹಿಂದಿಕ್ಕಿದ ‘ಕಾಂತಾರ 1’

Kantara Chapter 1 box office: ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ 100 ಕೋಟಿಯ ಗಡಿಯತ್ತ ಸಿನಿಮಾ ದಾಪುಗಾಲು ಹಾಕಿದ್ದು ಆಯಾ ರಾಜ್ಯಗಳಲ್ಲಿ ಕೆಲ ಹೊಸ ದಾಖಲೆಗಳನ್ನು ಸಹ ಬರೆದಿದೆ. ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರ ಹಿಟ್ ಸಿನಿಮಾಗಳ ಗಳಿಕೆಯ ದಾಖಲೆಗಳನ್ನೇ ಮುರಿದು ಹಾಕಿದೆ.

ಬಾರದ ಲೋಕಕ್ಕೆ ಹೋದ ‘ಉಷಾ’: ತಪ್ಪು ಒಪ್ಪಿಕೊಂಡರೂ ಮನ್ನಿಸಲಿಲ್ಲವೇ ಈ ಸಮಾಜ?

​"ನಾನು ತಪ್ಪು ಮಾಡಿದ್ದು ನಿಜ, ಆದ್ರೆ ಈ ಕಿರುಕುಳ ತಾಳಲಾರೆ.." - ಕಣ್ಣೀರು ಹಾಕುತ್ತಲೇ ಸಾವಿನ ಮನೆ ಸೇರಿದ ಅಬಲೆ!

ಧಾರವಾಡ ಸೆಂಟ್ರಲ್ ಜೈಲ್ 'ಡ್ರಗ್ಸ್' ದಂಧೆ ಅಡ್ಡ: ಬೇಲಿಯೇ ಎದ್ದು ಹೊಲ ಮೇಯ್ದ ರಣರೋಚಕ ಸ್ಟೋರಿ!

ಕತ್ತಲಲ್ಲಿ ಖೈದಿಗಳಿಗೆ 'ಕಿಕ್' ನೀಡುತ್ತಿದ್ದ ಖಾಕಿಧಾರಿಗಳು: ಮುತಾಲಿಕ್ ಎಚ್ಚರಿಕೆ ಬೆನ್ನಲ್ಲೇ ಪೊಲೀಸರ ಮಿಡ್‌ನೈಟ್ ಆಪರೇಷನ್ ಸಕ್ಸಸ್!

ಮಂಗಳೂರಿನಲ್ಲಿ ನೆತ್ತರು ಹರಿಸಿದ ಗ್ಯಾಂಗ್‌ವರ್: ತೊಕ್ಕೊಟ್ಟು ಫ್ಲೈಓವರ್ ಮೇಲೆ 'ಟಾಬ್ಲೆಟ್ ಆರಿಫ್' ಭೀಕರ ಕೊಲೆ!

ಸಿನಿಮೀಯ ಮಾದರಿಯಲ್ಲಿ ನಡೆದ ಹತ್ಯೆ: ಬೈಕ್ ಸವಾರನ ಮೇಲೆ ಕಾರ್ ಹರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾದ ದುಷ್ಕರ್ಮಿಗಳು!

ತುಂಗಭದ್ರಾ ನದಿಯ ಮಡಿಲಲ್ಲಿ ಕರಗಿದ ಕನಸುಗಳು: ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

ಮದುವೆಯ ಸಂಭ್ರಮದ ನಡುವೆ ಮರಣ ಮೃದಂಗ: ರಾಯಚೂರು ಕುಟುಂಬದಲ್ಲಿ ಆವರಿಸಿದ ಶೋಕದ ಕಾರ್ಮೋಡ

ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಯಲು: ಡಾ. ಸಮೀಕ್ಷಾ ರೆಡ್ಡಿ ಸಾವಿನ ಸುತ್ತ ನಿಗೂಢ ಜಾಲ!

ಅಲ್ಲಿ ಎಲ್ಲವೂ ಸರಿಯಿಲ್ಲ!" - ವೈದ್ಯೆಯ ಕೊನೆಯ ವಾಟ್ಸಪ್ ಸಂದೇಶಗಳು ಬಯಲು ಮಾಡಿದ ಭೀಕರ ವಾಸ್ತವ!

Read all News